ಪ್ರಾಯಃ ಕಂದುಕಪಾತೇನೋತ್ಪತತ್ಯಾರ್ಯಃ ಪತನ್ನಪಿ
ತಥಾ ಪತತ್ಯನಾರ್ಯಸ್ತು ಮೃತ್ಪಿಂಡಪತನಂ ಯಥಾ ||
ಆರ್ಯನಾದವನು, ಅಂದರೆ ಸಂಸ್ಕಾರವಂತನು ತನ್ನ ಜೀವನದಲ್ಲಿ ಯಾವುದೋ ಕಾರಣಕ್ಕೆ ಪತನವನ್ನು ಅಥವಾ ಅಪಜಯವನ್ನು ಕಂಡರೂ ಚೆಂಡೊಂದು ಕೆಳಕ್ಕೆ ಬಿದ್ದು ನೆಲಕ್ಕೆ ಬಡಿದು ಮತ್ತೆ ಪುಟಿದೇಳುವಂತೆ ಮೇಲಕ್ಕೆದ್ದುಬರುತ್ತಾನೆ. ಅದೇ ಅನಾರ್ಯನು, ಅಂದರೆ ಸಂಸ್ಕಾರಶೂನ್ಯನಾದವನು ನೆಲಕ್ಕೆ ಬಿದ್ದುದೇ ಆದರೆ ಕೆಳಕ್ಕೆ ಬಿದ್ದ ಮಣ್ಣಿನ ಹೆಂಟೆಯಂತೆಯೇ ಸರಿ, ಮತ್ತೆ ಮೇಲೆದ್ದುಬರಲಾರ.
ಶ್ರೀ ನವೀನ ಗಂಗೋತ್ರಿ